*ಶ್ರೀ ಶ್ರೀಪಾದರಾಜರು
ಶ್ರಿಯುತರು ಆಕಾಶದಲ್ಲಿ ಕಂಡುಬರುವ ದ್ರುವ ನಕ್ಷತ್ರದ ಸ್ವರೂಪವೇ ಆಗಿದ್ದಾರೆ. ಕರ್ನಾಟಕ ರಾಜ್ಯದ
ಮುಳಬಾಗಿಲುನಲ್ಲಿ ಶ್ರೀ ಪಾದರಾಜ ಮಠ ಇದೆ, ಇಲ್ಲಿ. ಪ್ರತಿ ವರ್ಷ ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ ನಡೆಯುತ್ತದೆ.
ರಾಜ್ಯದ ಪೂರ್ವ ಭಾಗದಲ್ಲಿ ಇರುವ
ಮುಳಬಾಗಿಲು ಸ್ಥಳವು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು' ಅಥವಾ `ಮುಳಬಾಗಿಲು' ಎಂದು ಪ್ರಸಿದ್ಧವಾಗಿದೆ.
ದೇವರ ದರುಶನ ಪಡೆಯಲೆಂದು ಇಲ್ಲಿಗೆ ಬರುವ ಅನೇಕ ಭಕ್ತರ ಪಾಲಿಗೆ ಈ ಸನ್ನಿಧಾನದ ಪ್ರಶಾಂತ ವಾತಾವರಣವು ಶಾಂತಿ ಮತ್ತು ಸಂತೃಪ್ತಿಯ ಚಿಲುಮೆಯಾಗಿದೆ.
ಶ್ರೀ ಮಠದ ಪೀಠಾಧಿಪತಿ ಯಾಗಿ ಭಕ್ತರ ಉದ್ದಾರ ಮಾಡಿದರು,ಶ್ರೀಪಾದರಾಜರು ಇಳಿವಯಸ್ಸಿನಲ್ಲಿದ್ದಾಗಲೊಮ್ಮೆ ಅವರಿಗೆ ಗಂಗಾಸ್ನಾನದ ಬಯಕೆಯಾಯಿತು. ಆದರೆ ಅಷ್ಟು ದೂರ ಪ್ರಯಾಣಿಸುವಷ್ಟು ಸುಸ್ಥಿರ ದೇಹಸ್ಥಿತಿಯಲ್ಲಿ ಅವರಿರಲಿಲ್ಲ.
ಅವರ ಸ್ಮರಣೆಯ ಕಾರಣದಿಂದಲೇ
ಆಗ ಸ್ವತಃ ಗಂಗೆಯೇ ಅವರಿಗೆ ಕಾಣಿಸಿಕೊಂಡು, ತಾನೇ ನರಸಿಂಹ ತೀರ್ಥಕ್ಕೆ ಬರುವುದಾಗಿ ವಾಗ್ದಾನವಿತ್ತಳು.

ಅಂದಿನಿಂದ ಇಂದಿನವರೆಗೆ, ನರಸಿಂಹ ತೀರ್ಥದಲ್ಲಿ ಸ್ನಾನ ಮಾಡುವುದು ಗಂಗಾಸ್ನಾನಕ್ಕೆ ಸಮ ಎಂದು ಪರಿಗಣಿಸಲಾಗುತ್ತದೆ.

ಶ್ರೀಪಾದರಾಜರು ತಮ್ಮ ಮಹಾನ್ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ಮತ್ತು ಇತರ ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾ ಭಂಡಾರದ ಪಿತಾಮಹರೆಂದೇ ಪ್ರಖ್ಯಾತರಾದರು. ಆದ್ದರಿಂದಲೇ ಅವರ ಕಾಲವನ್ನು ಭಾರತೀಯ ಜ್ಞಾನ ಪರಂಪರೆಯ ಸುವರ್ಣಯುಗವೆಂದು ಕರೆಯುತ್ತಾರೆ.
ಶ್ರೀಪಾದರಾಜರು ವೃಂದಾವನ ಪ್ರವೇಶಿಸಿದ್ದು ಕ್ರಿ.ಶ.1504ರಲ್ಲಿ. ಇಂದಿಗೂ ಅವರ ಭಕ್ತರು ಮನಃಪೂರ್ವಕವಾಗಿ ಅವರ ವೃಂದಾವನಕ್ಕೆ ಸೇವೆ ಸಲ್ಲಿಸುತ್ತಾರೆ, ಅವರು ಅಷ್ಟೇ ನಿಜ ಭಕ್ತರ ಪವಿತ್ರ ಬೇಡಿಕೆಗಳನ್ನು ಈಡೇರಿಸುತ್ತಾರೆ.
#ಪಾದರಾಜ #ಪಂಚರತ್ನಮಾಲಿಕ #Sri #Sripadaraja #ಕೀರ್ತನಕಾರರ #ಕಿರುಪರಿಚಯ #ಕನ್ನಡವ್ಯಾಕರಣ #SriPadharajaMutt #SanyasaSweekara #Peetarohana #Teertha #Mulbagal.
https://youtube.com/shorts/pV7uWdPPKiA?si=vqrs_bOzlmPEMKAw